NEWS DETAILS

Image Description

ಶ್ರೀ ಶತಚಂಡಿಕಾ ಮಹಾಯಾಗ- ಬೆಂಗಳೂರು ಉತ್ತರ ವಲಯ

ದಿನಾಂಕ 17-04-2022 ನೇ ಭಾನುವಾರ, ಬೆಂಗಳೂರು ಉತ್ತರ ವಲಯ ಯಲಹಂಕ ಉಪನಗರ ಅಟ್ಟೂರು, ಮುನೇಶ್ವರ ಬಡಾವಣೆಯಲ್ಲಿ ಶ್ರೀ ಶತಚಂಡಿಕಾ ಮಹಾಯಾಗವು ಶ್ರೀ ಶ್ರೀ ಶ್ರೀ ಡಾ||ಮಧುಸೂದನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೈಭವೋಪೇತವಾಗಿ ನಡೆಯಿತು.
ಈ ಮಹಾಪುಣ್ಯಕಾರ್ಯದಲ್ಲಿ ಅನೇಕ ವಿಪ್ರಸಮುದಾಯದವರು ಕುಟುಂಬ ಸಹಿತವಾಗಿ ಸಕ್ರಿಯವಾಗಿ ಪಾಲ್ಗೊಂಡು ಈ ಮಂಗಳಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಿದರು.ಈ ಸಂದರ್ಭದಲ್ಲಿ  AKBMS ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೌಶಿಕ್  ಹಾಗೂ ಉತ್ತರ ವಲಯದ ಸಹ ಸಂಚಾಲಕರಾದ ಶ್ರೀ ಕೆ ಎಸ್ ಶ್ರೀಕಂಠ ಪ್ರಸಾದ್ ರವರೊಂದಿಗೆ ಸೇರಿ AKBMS ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರ ಮಾರ್ಗದರ್ಶನದಂತೆ ಬೆಂಗಳೂರು ನಗರ ಉತ್ತರ ವಲಯದ ಕ್ಷೇತ್ರದಲ್ಲಿ AKBMS ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಟ್ಟರು.ಮಹಾಸಭಾದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಪ್ರರ ಒಳಿತಿಗಾಗಿ ಶ್ರಮಿಸಬೇಕೆಂದು ಕೋರಿದರು.