NEWS DETAILS

Image Description

ಹೊಸಪೇಟೆ ಕೃಷ್ಣಾ ನಗರದಲ್ಲಿ ನಿರ್ವಹಣೆ ನೆರೆವೇರಿಸಲಾಯಿತು

ಹೊಸಪೇಟೆ ಕೃಷ್ಣಾ ನಗರದಲ್ಲಿ ದಿನಾಂಕ ೧೫.೦೪.೨೦೨೨ ಶುಕ್ರವಾರದಂದು ಬೆಳಗ್ಗೆ ಬ್ರಾಹ್ಮೀ ಶುಭಮುಹೂರ್ತ ಪುಷ್ಕರಾಂಶದಲ್ಲಿ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಶ್ರೀ ಶ್ರೀ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳ ಅದ್ವಯರಾದಲ್ಲಿ ಶ್ರೀ ಗಾಯತ್ರಿ ದೇವಿ ಶಿಲಾಮೂರ್ತಿ ಮತ್ತು ಪಂಚಾಯತನ ಯಂತ್ರ ಪ್ರತಿಷ್ಠಾಪನೆಯನ್ನು , ಪ್ರಾಣಪ್ರತಿಷ್ಠೆ ,ಶಾಂತಿ ಹೋಮಾದಿಗಳು , ಬಲಿಪ್ರದಾನ , ಮಹಾಕುಂಬಾಭಿಷೇಕವನ್ನು ಶ್ರೀ ಗಾಯತ್ರಿ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಸದ್ಯಸರ ಕ್ಷೇಮಾಭಿವೃದ್ಧಿ ಸಂಸ್ಥೆ , ಹೊಸಪೇಟೆ ಹಾಗು ಹೊಸಪೇಟೆ ತಾಲೂಕು ಬ್ರಾಹ್ಮಣ ಸಂಘ ಇವರ ನಿರ್ವಹಣೆಯಲ್ಲಿ  ನೆರೆವೇರಿಸಲಾಯಿತು .
  ಕುಂಭಾಭಿಷೇಕ ಪೂರ್ಣಾಹುತಿಯಲ್ಲಿ ಗಾಯತ್ರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹನುಮಂತ ರಾವ್ ಹಾಗು ಕುಟುಂಬ ಮತ್ತು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ದಿವಾಕರ್ ಮತ್ತು ಕುಟುಂಬ , ನಗರದ ಹೆಸರಾಂತ ಲೆಕ್ಕ ಪರಿಶೋಧಕ ಶ್ರೀ  ಸೀನಮಭಟ್ ಹಾಗು ಮಕ್ಕಳು , ಗಾಯತ್ರಿ ಬ್ಯಾಂಕಿನ ಸಿಇಓ ಜೋಶಿ ಮತ್ತು ಕುಟುಂಬ ವರ್ಗದವರು , ನಗರದ ಖ್ಯಾತ ಉದ್ಯಮಿ ಶ್ರೀ ಶ್ರೀನಿವಾಸ್ ರಾವ್ , ನಿವೃತ್ತ ಇಂಜಿನಿಯರ್ ಶ್ರೀ ಲಲಿತ ಪ್ರಸಾದ್ , ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ಉಮೇಶ್ ಹಾಗು ಗುರುದತ್ ಅಗ್ನಿಹೋತ್ರಿ , ಬ್ರಾಹ್ಮಣ ಸಂಘದ ಕಾರ್ಯದರ್ಶಿ ಶ್ರೀ ವೇಣುಗೋಪಾಲ್ ವೈದ್ಯ ,ಚಿತ್ತವಾಡ್ಗಿ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಶ್ರೀನಿವಾಸ್ , ಕೋಟೆಯ ಗುರುರಾಜ್ ಹಾಗು ಮಾಜಿ ನಗರಸಭಾ ಸದಸ್ಯ  ಚಂದ್ರಕಾಂತ್ ಕಾಮತ್ ಹಾಗು  ವಿಪ್ರ ಸಮುದಾಯದ ಮುಖಂಡರು , ಮಹಿಳೆಯರು ಮತ್ತು ಗಾಯತ್ರಿ ಪರಿವಾರದವರು ಭಗವಹಿಸಿದ್ದರು , ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು .