NEWS DETAILS

Image Description

ಶ್ರೀಮಜ್ಜಗದ್ಗುರು ಕಂಚಿ ಕಾಮಕೋಟಿ ಪೀಠಾಧೀಶ್ವರರಾದ ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಮಹಾಸ್ವಾಮಿಗಳ ಅನುಗ್ರಹ

ಶ್ರೀಮಜ್ಜಗದ್ಗುರು ಕಂಚಿ ಕಾಮಕೋಟಿ ಪೀಠಾಧೀಶ್ವರರಾದ  ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಮಹಾಸ್ವಾಮಿಗಳ ಅನುಗ್ರಹವನ್ನು ಹೊಸಪೇಟೆಯ ವಿದ್ಯಾರಣ್ಯ  ವಿದ್ಯಾಪೀಠದಲ್ಲಿ ಪಡೆಯಲಾಯಿತು
ಕರ್ನಾಟಕ ರಾಜ್ಯದಲ್ಲಿ ಬ್ರಾಹ್ಮಣರ ಕ್ಷೇಮಾಭಿವೃದ್ಧಿಯ ಸಂಬಂಧವಾಗಿ ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಅನೇಕ ಸಲಹೆಗಳನ್ನು ನೀಡಿದರು. ಕಂಚಿ ಕಾಮಕೋಟಿ ಪೀಠ ಶಿಕ್ಷಣಕ್ಷೇತ್ರದಲ್ಲಿ ಕೈಗೊಂಡಿರುವ ಯೋಜನೆಗಳ ಉಪಯೋಗವನ್ನು ಕರ್ನಾಟಕದ ಬ್ರಾಹ್ಮಣರು ಪಡೆದುಕೊಳ್ಳಬೇಕು ಎಂದು ಹೇಳಿದರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೈಗೊಂಡಿರುವ ಕಾರ್ಯಕ್ರಮಗಳನ್ನು ಮೆಚ್ಚಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಹೊಸಪೇಟೆ ಮಾಜಿ ಶಾಸಕರಾದ ಗವಿಯಪ್ಪ ನವರು ಉಪಸ್ಥಿತರಿದ್ದರು: ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹೊಸಪೇಟೆಯ ಶ್ರೀ ಉಮೇಶ್ ಮತ್ತು ಶ್ರೀ ದಿವಾಕರ್ ಅವರು ಸಹ ಉಪಸ್ಥಿತರಿದ್ದರು