NEWS DETAILS

Image Description

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ನರಸಿಂಹ ಸಹಸ್ರನಾಮ ಪಠನ ಪೂಜಾ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ 08.03.2022ರಂದು ಸಂಜೆ 4.30ರಿಂದ ಗಾಯತ್ರಿ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ವತಿಯಿಂದ ರಾಜ್ಯ ಸಂಚಾಲಕಿ ಶ್ರೀಮತಿ ರೂಪಾ ಶಾಸ್ತ್ರಿ ನೇತೃತ್ವದಲ್ಲಿ ಶ್ರೀ ನರಸಿಂಹ ಸಹಸ್ರನಾಮ ಪಠನ ಪೂಜಾ ಕೈಂಕರ್ಯವು ವಿಜೃಂಭಣೆಯಿಂದ ನೆರವೇರಿತು

ಕೂಟ ಬ್ರಾಹ್ಮಣ ಮಹಿಳೆಯರ ಸಹಕಾರದೊಂದಿಗೆ ನೂರಾರು ಮಹಿಳೆಯರು ಶ್ರೀ ನರಸಿಂಹ ಸಹಸ್ರನಾಮ ಪಠನವನ್ನು ನೆರವೇರಿಸಿದರು. ನರಸಿಂಹ ಸಹಸ್ರನಾಮ ಪಠನದ ಪುಸ್ತಕವನ್ನು ಶ್ರೀಮತಿ ಸರೋಜಾ ರಾವ್ ರವರು ಉಚಿತವಾಗಿ ಎಲ್ಲಾ ಮಹಿಳೆಯರಿಗೆ ವಿತರಿಸಿದರು

ಈ ಕಾರ್ಯಕ್ರಮದಲ್ಲಿ ಮಹಾಸಭಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಮತ್ತು ಶ್ರೀಮತಿ ಮೇಧಿನಿ ಉದಯ್ ಗರುಡಾಚಾರ್ ಭಾಗವಹಿಸಿದ್ದರು 

ವಂದನೆಗಳೊಂದಿಗೆ 
ಶ್ರೀಮತಿ ರೂಪಾ ಶಾಸ್ತ್ರಿ
ರಾಜ್ಯ ಸಂಚಾಲಕಿ, ಮಹಿಳಾ ವಿಭಾಗ 
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ