NEWS DETAILS

Image Description

ಬಿಜಾಪುರ ಜಿಲ್ಲೆಯ ಹಾಗು ಬಾಗಲಕೋಟೆ ಜಿಲ್ಲೆಯ ವಿವಿಧ ವಿಪ್ರ ಮಹಿಳಾ ಸಂಘದ ಪದಾಧಿಕಾರಿಗಳ ವಿವಿಧ ಕಾರ್ಯಕ್ರಮ ಬಗ್ಗೆ ಚರ್ಚೆ

ಬಿಜಾಪುರ ಹಾಗು ಬಾಗಲಕೋಟೆ  ಜಿಲ್ಲೆಯ ವಿವಿಧ ವಿಪ್ರ  ಮಹಿಳಾ ಸಂಘದ ಪದಾಧಿಕಾರಿಗಳಿಂದ ಬಿರುಸಾದ ಕೂಗು ಹಾರನಹಳ್ಳಿ ಮತ್ತೊಮ್ಮೆ

ದಿನಾಂಕ 12 /06 /2024 ರಂದು ಬಿಜಾಪುರ ಜಿಲ್ಲೆಯ ಹಾಗು ಬಾಗಲಕೋಟೆ ಜಿಲ್ಲೆಯ  ವಿವಿಧ ವಿಪ್ರ  ಮಹಿಳಾ ಸಂಘದ ಪದಾಧಿಕಾರಿಗಳು ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರನ್ನು ಭೇಟಿ ಮಾಡಿ ಮಹಿಳಾ ಸ್ವಸಹಾಯ ಸಂಘದಡಿಯಲ್ಲಿ ಹಮ್ಮಿಕೊಳ್ಳಲಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಅಧ್ಯಕ್ಷರಿಗೆ ವಿವರಿಸಿದರು,  ಮಹಾಸಭೆಯ ಉಪಾಧ್ಯಕ್ಷರಾದ ಶ್ರೀ ಸುಧಾಕರ ಬಾಬು ಅವರ ಮಾನಸ ವಿದ್ಯಾ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ಜರುಗಿತು , ಹಾಗು ಈ ಕಾರ್ಯಕ್ರಮಕ್ಕೆ ಶ್ರೀ ಸುಧಾಕರ ಬಾಬು ಅವರ ಸಂಪೂರ್ಣ ಸಹಕಾರ ನೀಡಿದರು .

ಈ ಸಂದರ್ಭದಲ್ಲಿ ಮಹಿಳಾ ಪದಾಧಿಕಾರಿಗಳು ಬಿಜಾಪುರದಿಂದ ಧರಿಸಿ ಬಂದಿದ್ದ ಟೋಪಿ ಹಾಗು ಅದರ ಮೇಲಿದ್ದ ವಿಜ್ಞಾಪನೆ  "ವಿಪ್ರ ಸಮೂಹದ ಏಳಿಗೆಗಾಗಿ  ಮತ್ತೊಮೆ ಅಶೋಕ  ಹಾರನಹಳ್ಳಿ " ಹಾರನಹಳ್ಳಿ for AKBMS " ಎಲ್ಲರ ಗಮನ ಸೆಳೆಯಿತು,  ಮತ್ತೊಮ್ಮೆ ಹಾರನಹಳ್ಳಿ ಅವರೇ ಮಹಾಸಭಾದ ಅಧ್ಯಕ್ಷರಾಗಬೇಕು ಎಂಬ ಕೂಗು ನೆರೆದಿದ್ದ ಎಲ್ಲ ಮಹಿಳಾ  ಪದಾಧಿಕಾರಿಗಳಿಂದ ಬಿರುಸಾಗಿಯೇ ಕೇಳಿ ಬಂದಿತು.