NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಉಪಾಧ್ಯಕ್ಷರು, ವಿಪ್ರ ಸಮುದಾಯದ ಮುಂಚೂಣಿ ನಾಯಕರು ಆದ ಶ್ರೀ ಹೂ. ನಾ. ಹಿರಿಯಣ್ಣ ಸ್ವಾಮಿ ಅವರ ನಿಧನ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಉಪಾಧ್ಯಕ್ಷರು, ವಿಪ್ರ ಸಮುದಾಯದ ಮುಂಚೂಣಿ ನಾಯಕರು ಆದ ಶ್ರೀ ಹೂ. ನಾ. ಹಿರಿಯಣ್ಣ ಸ್ವಾಮಿ ಅವರು  ದಿನಾಂಕ 20 /05 /2024 ರಂದು ನಿಧನರಾಗಿದ್ದ್ದಾರೆ , ವಿಪ್ರ ಸಮುದಾಯದ ಪರ ಅವರಿಗಿದ್ದ ಕಾಳಜಿ ಬಣ್ಣಿಸಲಾತೀತ , ಸರಿ ಸುಮಾರು 5 ದಶಕಗಳಿಂದ ಸತತವಾಗಿ ಸಮಾಜದ ಸಂಘಟನೆಗೆ ತಮ್ಮನು ತಾವು ತೊಡಗಿಸಿಕೊಂಡು ವಿಪ್ರರ ಕುಂದು ಕೊರತೆಗಳಿಗೆ ದನಿಯಾಗಿ ವಿಪ್ರ ಸಮಾಜದ ಶ್ರೇಯೋಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿರುತ್ತಾರೆ  , ಅವರ ಅಗಲಿಕೆ ನಾಡಿನ ಸಮಸ್ತ ವಿಪ್ರ ಸಮುದಾಯಕ್ಕೆ ಹಾಗು  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆಗೆ ತುಂಬಲಾರದ ನಷ್ಟ, ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗು ಮಹಾಸಭಾದ ಸಮಸ್ತ ಪದಾಧಿಕಾರಿಗಳು  ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಪ್ರಾರ್ಥಿಸುತ್ತ ತೀವ್ರ ಸಂತಾಪವನ್ನು ವ್ಯಕ್ತ ಪಡಿಸುತ್ತಿದೆ