NEWS DETAILS

Image Description

ಸಂಸ್ಕಾರ ದಿಂದ ಧಾರ್ಮಿಕ ಪ್ರಜ್ಞೆ ಜಾಗೃತ

ಸಂಸ್ಕಾರ ದಿಂದ ಧಾರ್ಮಿಕ ಪ್ರಜ್ಞೆ ಜಾಗೃತ 
ಶ್ರೀಧರ ಹೊಳ್ಳ
ಬ್ರಾಹ್ಮಣರಾದ ನಾವುಗಳು ಆಚಾರ ವಿಚಾರ ಸಂಧ್ಯಾವಂದನಾದಿ ಜಪ ತಪ ಅನುಷ್ಠಾನಗಳನ್ನು ಮಾಡಿಕೊಂಡು ಸಮಾಜದಲ್ಲಿ ಸುಸಂಸ್ಕೃತ ಮನುಷ್ಯರಾಗಿ ಬಾಳಬೇಕು ಹುಟ್ಟಿನಿಂದ ಸಾವು ತನಕ ಶೋಡಶ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಹಾಗಾದಾಗ ಮಾತ್ರ ಧಾರ್ಮಿಕ ಪ್ರಜ್ಞೆ ಜಾಗೃತವಾಗಲು ಸಾಧ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಧಾನ ಸಂಚಾಲಕರಾದ ಶ್ರೀಧರ ಹೊಳ್ಳ ಅಭಿಪ್ರಾಯ ಪಟ್ಟರು ಅವರು ಕೂಟ ಮಹಾಜಗತ್ತು (ರಿ) ಮಂಗಳೂರು ಅಂಗಸಂಸ್ಥೆಯ ವತಿಯಿಂದ ಮಂಗಳಾದೇವಿ ದೇವಸ್ಥಾನದ  ವಠಾರದಲ್ಲಿ ಹಮ್ಮಿಕೊಳ್ಳಲಾದ ಇಪ್ಪತ್ತಮೂರನೆ ವರ್ಷದ  ಇಪ್ಪತ್ತು ದಿನಗಳ ವಸಂತ ವೇದ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿ ಸಿ. ಎ ಚಂದ್ರಮೋಹನ್ ಮಂತ್ರ ಪಠಣದಿಂದ ಆತ್ಮ ಶುದ್ಧಿಯಾಗಿ ಮನಸ್ಸು ಸದೃಢವಾಗುವುದು ಶಾಲಾ ಚಟುವಟಿಕೆಯಲ್ಲಿ ಏಕಾಗ್ರತೆ ಲಭಿಸಲು ಸಾದ್ಯ ಎಂದರು. ಶಿಬಿರದ ಗುರುಗಳಾದ  ವಿದ್ವಾಂಸರಾದ ಶ್ರೀಕರ ಭಟ್  ರಾಮಚಂದ್ರ ಭಟ್. ಉಪಾಧ್ಯಕ್ಷರಾದ ರಘುರಾಮ್ ರಾವ್ ಶುಭ ಹಾರೈಸಿದರು. ಮಂಗಳಾದೇವಿ ದೇವಳದ ಆಡಳಿತ ಮೊಕ್ತೇಸರ ಅರುಣ್ ಐತಾಳ್ ಪ್ರಧಾನ ಅರ್ಚಕ ವಾಸುದೇವ ಐತಾಳ್ ಚಕ್ರಪಾಣಿ ಗೋಪಾಲಣ್ಣ, ಕೃಷ್ಣ ಮೈಯ್ಯ,  ಪದ್ಮನಾಭ ಮಯ್ಯ, ಶಿವರಾಂ ರಾವ್ ಅರಿಕೆರೆ,  ಕೂಟವಾಣಿ ಸಂಪಾದಕ ಆಡೂರು ಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು. ಸುಮಾರು ಮೂವತ್ತೈದು ಜನ ತ್ರಿಮತಸ್ಥ ಬ್ರಾಹ್ಮಣ ವಟುಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯದರ್ಶಿ ಗೋಪಾಲಕೃಷ್ಣ ಮಯ್ಯ ಸ್ವಾಗತಿಸಿ ನಿರೂಪಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಕೊರ್ಯಾ ವಂದಿಸಿದರು.