NEWS DETAILS

Image Description

ಹಾವೇರಿ ಜಿಲ್ಲೆಯಲ್ಲಿ - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

29-1-24 ರಂದು ಹಾವೇರಿ ಜಿಲ್ಲೆ ಹಾವೇರಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 11 ಗುಂಟೆ ಜಾಗವನ್ನು ಖರೀದಿ ಮಾಡಲಾಯಿತು ಇದಕ್ಕೆ ಸಹಕಾರ ನೀಡಿದ ಮಾಜಿ ಶಾಸಕರು ಸಮಾಜಕ್ಕೆ ಅತಿ ಆತ್ಮೀಯರಾದ ಮಾನ್ಯ ಶ್ರೀ ನೆಹರು ಓಲೆಕಾರ್ ಸಾಹೇಬರು ಅವರನ್ನು ಸನ್ಮಾನಿಸಲಾಯಿತುಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷರು ಮಾಜಿ ಆಟಾರ್ನಿ ಜನರಲ್ ಆದ ಮಾನ್ಯ ಶ್ರೀ ಅಶೋಕ್ ಹಾರನಹಳ್ಳಿ ಅವರನ್ನು ಹಾವೇರಿ ಜಿಲ್ಲಾ ಬ್ರಾಹ್ಮಣ ಸಮಾಜದ ಮುಖಂಡರು ಸನ್ಮಾನಿಸಿದರು ಈ ಸಮಯದಲ್ಲಿ ವಿಪ್ರ ಸಮಾಜದ ಹಾವೇರಿ ಜಿಲ್ಲಾ ಉಸ್ತುವಾರಿಯಾದ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ವಿಜಯ ನಾಡಜೋಶಿ ಉಪಸ್ಥಿತರಿದ್ದರು ಸನ್ಮಾನವನ್ನು ಜಿಲ್ಲೆಯ ಹಿರಿಯರಾದ ಶ್ರೀ ಪ್ರಭಾಕರ್ ಮಂಗಳೂರು ಜಿಲ್ಲಾಧ್ಯಕ್ಷರಾದ ವಸಂತ ಮುಕ್ತಾಲಿ ರಮೇಶ್ ಕಡಕೋಳ. ಶ್ರೀಯುತ ಬದಾಮಿ ನಾಯಕ್. ಶ್ರೀಮತಿ ದೀಪಾ ಪಾಟೀಲ್ ಬಾಬಣ್ಣ ಹುದ್ದಾರ್ ವಿನಾಯಕ ಹುದ್ದಾರ್. ಉದಯ್ ಕುಲಕರ್ಣಿ ಉಮೇಶ್ ಕುಲಕರ್ಣಿ ಉಮೇಶ್ ರಟ್ಟಹಳ್ಳಿ ಹಾಗೂ ಅನೇಕ ವಿಪ್ರ ಮುಖಂಡರು ಉಪಸ್ಥಿತರಿದ್ದು ಸನ್ಮಾನಿಸಿದರು ಈ ಕಾರ್ಯಕ್ರಮಗಳು ಮಾನ್ಯ ಶ್ರೀ ಪವನ್ ಬಹದ್ದೂರ್ ದೇಸಾಯಿ ಇವರ ಮನೆಯಲ್ಲಿ ನಡೆದವು ಈ ಜಾಗದ ಖರೀದಿಗೆ ಕಾರಣಿ ಭೂತರಾಗಿ ಹೆಚ್ಚು ಪ್ರಯತ್ನ ಮಾಡಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಮಾನ್ಯಶ್ರೀ ಪವನ್ ಬಹದ್ದೂರ್ ದೇಸಾಯಿ ಮತ್ತು ವಿಜಯ ನಾಡ ಜೋಶಿ. ಬಾಬಣ್ಣ ಹುದ್ದಾರ್ ಇವರೆಲ್ಲರಿಗೂ ಸಮಾಜದ ವತಿಯಿಂದ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಅಶೋಕ್ ಹಾರ್ನಳ್ಳಿ ಅವರು ಅಭಿನಂದಿಸಿದರು ಸಮಾಜಕ್ಕೆ ಇಂತಾ ಕೆಲಸ ಕಾರ್ಯಗಳು ಮೇಲಿಂದ ಮೇಲೆ ನಡೆಯಲಿ ಎಂದು ಶುಭ ಹಾರೈಸಿದರು. ವಂದನೇಗಳೊಂದಿಗೆ. ಹಾವೇರಿ ಜಿಲ್ಲಾ ಬ್ರಾಹ್ಮಣ ಸಂಘ