NEWS DETAILS

Image Description

"ಅಭಿಜಾತೆ-2024" - ಕಾಫಿನಾಡು

10-12-23ರಂದು ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಲಾಯಿತು. 
ಅ.ಕ.ಬ್ರಾ.ಮ.ಸ.ಚಿಕ್ಕಮಗಳೂರು ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ಶ್ರೀಮತಿ ಶಾಂತಕುಮಾರಿ ಹಾಗೂ ಮಹಿಳಾ ಸದಸ್ಯೆಯರೊಂದಿಗೆ ಅಭಿಜಾತೆ-2024 3ನೇ ರಾಜ್ಯಮಟ್ಟದ ವಿಪ್ರ ಮಹಿಳಾ ಸಮ್ಮೇಳನದ ಬಗ್ಗೆ ವಿಷದವಾಗಿ ಚರ್ಚಿಸಿ, ಸಮ್ಮೇಳನದಲ್ಲಿ ಭಾಗವಹಿಸಲು ಬರಲು ಜಿಲ್ಲೆಯಲ್ಲಿ ನಡೆಸಿರುವ ಸಿದ್ಧತೆಗಳನ್ನು ತಿಳಿದುಕೊಳ್ಳಲಾಯಿತು.
ಸಮ್ಮೇಳನದ ಕಾರ್ಯಕ್ರಮಗಳ ವಿವರ, ಭಾಗವಹಿಸುವ ಸದಸ್ಯರಿಗೆ ಒದಗಿಸಲಾಗುವ ಅವಶ್ಯ ವ್ಯವಸ್ಥೆಗಳು ಈ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು. 
ಸದಸ್ಯರು ಅತ್ಯಂತ ಉತ್ಸುಕತೆಯಿಂದ ತಮ್ಮ ಭಾಗವಹಿಸುವಿಕೆ ಹಾಗೂ ಸಂಪೂರ್ಣ ಸಹಕಾರವನ್ನು ತುಂಬು ಮನದಿಂದ ವ್ಯಕ್ತಪಡಿಸಿದರು.
ಅ.ಕ.ಬ್ರಾ.ಮಹಾಸಭೆಯ ಶ್ರೀ ಸುಧಾಕರ್ ಬಾಬು, ಕಾರ್ತಿಕ್ ಬಾಪೆಟ್ ಹಾಗೂ ಸುನಿಲ್ ಲಕ್ಯ ರವರು ಸಭೆಯಲ್ಲಿ ಉಪಸ್ಥಿತರಿದ್ದರು.

-  ಡಾ. ಶುಭಮಂಗಳ ಸುನಿಲ
ರಾಜ್ಯ ಸಂಚಾಲಕಿ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)
ಮಹಿಳಾ ವಿಭಾಗ