NEWS DETAILS

Image Description

ವಿಜಯಪುರ ಶ್ರೀ ಕೃಷ್ಣ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಜಯಪುರ ಜಿಲ್ಲಾ ಘಟಕದ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆ

9-12-23 ರಂದು ಸಂಜೆ 5:00ಗೆ ವಿಜಯಪುರ ಶ್ರೀ ಕೃಷ್ಣ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಜಯಪುರ ಜಿಲ್ಲಾ ಘಟಕದ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಾನ್ಯ ಶ್ರೀಶ್ರೀ ಹರಿ ಗೋಳಸಂಗಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ವಿಜಯೇಂದ್ರನಾಡ ಜೋಶಿ ರಾಜ್ಯಮಹಿಳಾ ಸಹ ಸಂಚಾಲಕಿಯಾದ ಶ್ರೀಮತಿ ಲಕ್ಷ್ಮಿ ಕುಲಕರ್ಣಿ ಮಹಿಳಾಮಂಡಲಗಳ ಒಕ್ಕೂಟದ ಅಧ್ಯಕ್ಷರಾದ ಮತ್ತು ಸಂಕಟನಾ ಚತುರರಾದ ಶ್ರೀಮತಿ ಭಾಗ್ಯಶ್ರೀ ಕಟ್ಟಿ ವಿಜಯಪುರ ಜಿಲ್ಲಾ ಮಹಿಳಾ ಸಂಚಾಲಕಿಯಾದ ಶ್ರೀಮತಿ  ಜಯಶ್ರೀ ಕಣ್ಣೂರ್ ವಿಪ್ರ ಮುಖಂಡರಾದ ಮಾನ್ಯ ಶ್ರೀ ಮಹೇಶ್ ದೇಶಪಾಂಡೆ. ಹಿರಿಯ ಮುಖಂಡರಾದ ಶ್ರೀ ಮಾನ್ಯ ಜೋಶಿ ಅವರು ವೇದಿಕೆ ಮೇಲಿದ್ದರೂ ಸಂಘಟನೆ ಬಗ್ಗೆ ಮತ್ತು ಮಹಿಳಾ ಸಮಾವೇಶದ ಬಗ್ಗೆ ಸುದೀರ್ಘ ಚರ್ಚೆ ಆಯಿತು ವಿಜಯಪುರ ಜಿಲ್ಲೆಯಿಂದ ಸುಮಾರು 150 ಕಿಂತ ಹೆಚ್ಚು ಮಹಿಳೆಯರು ಸಮಾವೇಶಕ್ಕೆ  ಬರುವದಾಗಿ ಹೇಳಿದರು ಜಿಲ್ಲೆಯ ಎಲ್ಲ ತಾಲೂಕಿನಿಂದ ಮಹಿಳಾ ಪ್ರತಿನಿಧಿಗಳು ಆಗಮಿಸಿದ್ದರು ಕಾರ್ಯಕ್ರಮದ ರೂಪರೇಷೆ ಮತ್ತು ವ್ಯವಸ್ಥೆ ಬಗ್ಗೆ ಪ್ರಯಾಣದ ಬಗ್ಗೆ ಮತ್ತೆ ಸುರಕ್ಷಿತವಾಗಿ ಪುನಃ ಮರಳಿ ಬರುವ ಬಗ್ಗೆ ನಾಡಜೋಶಿ ಅವರು ಸವಿಸ್ತಾರವಾಗಿ ಮಾತನಾಡಿದರು ಶ್ರೀ ಗೋಳಸಂಗಿ ಶ್ರೀಯುತ ಜೋಶಿ ಶ್ರೀಯುತ ಮಹೇಶ್ ದೇಶಪಾಂಡೆ ಸಮಾವೇಶದ ಬಗ್ಗೆ ಮಾತನಾಡಿದರು ಶ್ರೀಮತಿ ಲಕ್ಷ್ಮಿ ಕುಲಕರ್ಣಿ ಸ್ವಾಗತಿಸಿದರು ಶ್ರೀಮತಿ ಭಾಗ್ಯಶ್ರೀ ಕಟ್ಟಿ ಸಮಾವೇಶದ ಬಗ್ಗೆ ಮಾತನಾಡಿದರು ಶ್ರೀಮತಿ ಜಯಶ್ರೀ ಕನ್ನೂರ್ ಸದಸ್ಯತ್ವ ಮತ್ತು ಸಮಾವೇಶದಲ್ಲಿ ಹೆಚ್ಚು ಮಳೆಯನ್ನು ಕರೆದುಕೊಂಡು ಬರುವ ಭರವಸೆಯನ್ನು ನೀಡಿದರು ಸಮಾಜದ ಅನೇಕ ಗಣ್ಯಾತಿಗಣ್ಯರು ಮಾತೆಯರು ಯುವಕರು ಪಾಲ್ಗೊಂಡಿದ್ದರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಅಶೋಕ ಹಾರ್ನಳ್ಳಿ ಹಾಗೂ ಡಾ. ಶ್ರೀಮತಿ ಶುಭ ಮಂಗಳ ಇವರ ನೇತೃತ್ವದಲ್ಲಿ ನಡೆಯುವ ಸಮಾವೇಶ ಯಶಸ್ವಿಯಾಗಲು ನಾವು ಎಲ್ಲರೂ ಕಂಕಣಭದ್ಧರಾಗಿದ್ದೇವೆ ಎಂದು ಜೈ ಘೋಷಣೆಯೊಂದಿಗೆ ಕಾರ್ಯಕ್ರಮ ಗೊಂದಲಾರ್ಪಣೆಯೊಂದಿಗೆ ಮುಕ್ತಾಯವಾಯಿತು. ವಂದನೆಗಳೊಂದಿಗೆವಿಜಯೇಂದ್ರ ನಾಡಜೋಶಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾವೇರಿ ಗದಗ್ ವಿಜಯಪುರ ಸಂಘಟನಾ ಉಸ್ತುವಾರಿ