NEWS DETAILS

Image Description

"ಅಭಿಜಾತೆ-2024" - ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ

ದಿನಾಂಕ 07.12.2023 ರಂದು ಬೆಂಗಳೂರಿನ ಬಸವನಗುಡಿಯಲ್ಲಿರುವ ಸೋದೆ/ಸೋಂದೆ ವಾಧಿರಾಜ ಮಠಕ್ಕೆ ತೆರಳಿ, ಶ್ರೀಮಠದ 
ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ರವರಿಂದ ಆಶೀರ್ವಾದ ಪಡೆಯಲಾಯಿತು. 
ಹಾಗೂ ಶ್ರೀ ಶ್ರೀ ಶ್ರೀ ಗಳಿಗೆ ನಮ್ಮ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ವಿಭಾಗದ ವತಿಯಿಂದ ಜನವರಿ 6-7, 2024ರಂದು ನಡೆಸಲಿರುವ 3ನೇ ರಾಜ್ಯಮಟ್ಟದ ವಿಪ್ರ ಮಹಿಳಾ ಸಮ್ಮೇಳನ *"ಅಭಿಜಾತೆ-2024"*ರ ಬಗ್ಗೆ ವಿವರಿಸಿ, ಸಲಹೆ-ಸೂಚನೆಗಳನ್ನು ಪಡೆಯಲಾಯಿತು. 
ನಮ್ಮ ಮಹಿಳಾ ಸಮ್ಮೇಳನದ ಆಮಂತ್ರಣ ಪತ್ರವನ್ನು ಗುರುಗಳ ಪಾದಗಳಿಗೆ ಅರ್ಪಿಸಿದೆವು. 
ಶ್ರೀ ಶ್ರೀ ಶ್ರೀ ಗಳು ವಿಪ್ರ ಮಹಿಳಾ
ಸಮ್ಮೇಳನವು ಸುಲಲಿತವಾಗಿ ನಡೆಯಲಿ ಎಂದು ನಮ್ಮನ್ನು ಆಶೀರ್ವದಿಸಿದುದು ನಮ್ಮ ಭಾಗ್ಯವೇ ಸರಿ.

- ಡಾ. ಶುಭಮಂಗಳ ಸುನಿಲ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಚಾಲಕಿ, ಮಹಿಳಾ ವಿಭಾಗ