NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರು ಹಾಗೂ ಜ್ಯೋತಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ *ಧಾರ್ಮಿಕ ಪ್ರವರ, ಡಾ|| ಬಿ.ಎನ್. ವಿ. ಸುಬ್ರಹ್ಮಣ್ಯ ಅವರ 81 ನೇ ಜನ್ಮ ದಿನಾಚರಣೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರು ಹಾಗೂ ಜ್ಯೋತಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ *ಧಾರ್ಮಿಕ ಪ್ರವರ, ಡಾ|| ಬಿ.ಎನ್. ವಿ. ಸುಬ್ರಹ್ಮಣ್ಯ ಅವರ 81 ನೇ ಜನ್ಮ ದಿನಾಚರಣೆಯನ್ನು ದಿನಾಂಕ 15-10-2023 ರ ಭಾನುವಾರ   ಶಂಕರಪುರಂ, ಶಾರದಾ ಡೆಂಟಲ್ ಹಾಗೂ ಕಣ್ಣಿನ ಆಸ್ಪತ್ರೆ ಬಳಿ ಇರುವ ಡಾ|| ಬಿ.ಎನ್.ವಿ. ಸುಬ್ರಹ್ಮಣ್ಯ ಸರ್ಕಲ್ ಬಳಿ ಜ್ಯೋತಿ ಟ್ರಸ್ಟ್ ನ ಟ್ರಸ್ಟಿ ಎಂ. ನರಸಿಹನ್   ಅವರು ಬಿ.ಎನ್‌. ವಿ.ಸುಬ್ರಹ್ಮಣ್ಯ ಅವರ  ಭಾವಚಿತ್ರ ಕ್ಕೆ ಪುಷ್ಪ ಸಮರ್ಪಣೆ ಮಾಡುವ  ಮುಖಾಂತರ  ಹುಟ್ಟು ಹಬ್ಬದ ಅಚರಣೆಗೆ ಚಾಲನೆ ನೀಡಿದರು, ಬಿ.ಎನ್.ವಿ.ಯವರ ಸಾಧನೆ, ಸಮಾಜದ ಬಗ್ಗೆ ಅವರಿಗಿದ್ದ ಕಳಕಳಿ,ಶಿಕ್ಷಣ, ಧಾರ್ಮಿಕ , ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಬ್ರಾಹ್ಮಣ ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಗಣ್ಯರು ಸ್ಮರಿಸಿದರು,  ಸತ್ಯೇಂದ್ರ, ತಾರಾನಾಥ್,  ಸತ್ಯನಾರಾಯಣ ಶಾಸ್ತ್ರಿ, ವಿಧಾನಸೌದ  ನರಸಿಂಹಮೂರ್ತಿ, ಪರಿಸರ ಚಂದ್ರು, ಮೈಸೂರಿನ ನಂ. ಶ್ರೀಠಕುಮಾರ್,  ಅಭಿಮಾನಿಗಳ ಬಳಗದ ರಥಯಾತ್ರೆಸುರೇಶ್, ಬಸವನಗುಡಿ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ಅಧ್ಯಕ್ಷ ರಾದ ಡಾ|| ಎಂ.ವಿ. ನಾಗಲಕ್ಷ್ಮೀ, ಅನಿರುದ್ದ, ವೇಣುಗೋಪಾಲ್, ಚಿಕ್ಕಬಳ್ಳಾಪುರದ ಶ್ರೀ ನಿವಾಸ್ ಹಾಗೂ ,
ಡಾ|| ಬಿ.ಎನ್. ವಿ. ಸುಬ್ರಹ್ಮಣ್ಯ ಅಭಿಮಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು,