NEWS DETAILS

Image Description

ರಾಜ್ಯ ಮಟ್ಟದ ಮೂರನೇ ಮಹಿಳಾ ಸಮಾವೇಶವನ್ನು ಅಧ್ಯಕ್ಷರಾದ ಶ್ರೀ ಅಶೋಕ್ ಹಾರ್ನಳ್ಳಿ ಯವರ ನೇತೃತ್ವದಲ್ಲಿ ಜನವರಿ 6. ಹಾಗು 7.2024.ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ನಡೆಸಲು ನಿಶ್ಚಯಿಸಲಾಗಿದೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ವತಿಯಿಂದ ರಾಜ್ಯ ಮಟ್ಟದ ಮೂರನೇ ಮಹಿಳಾ  ಸಮಾವೇಶವನ್ನು ಅಧ್ಯಕ್ಷರಾದ ಶ್ರೀ ಅಶೋಕ್ ಹಾರ್ನಳ್ಳಿ  ಯವರ ನೇತೃತ್ವದಲ್ಲಿ  ಜನವರಿ 6. ಹಾಗು 7.2024.ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ಈ ನಿಮಿತ್ತ ಕೆ ಅರ ಪುರಂ ನಲ್ಲಿ ಕೆ ಅರ ಪುರಂ ವಿಭಾಗದ  ಪೂರ್ವ ಭಾವಿ ಸಭೆ ನಡೆಸಲಾಯಿತು , ಈ  ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀ ಅಶೋಕ್ ಹಾರ್ನಳ್ಳಿ,  ರಾಜ್ಯ ಮಹಿಳಾ ಸಂಚಾಲಕಿ  ಶ್ರೀಮತಿ ಶುಭ ಮಂಗಳ ಸುನಿಲ್, ಶ್ರೀಯುತ ನಾಗರಾಜಾಚಾರ್ಯರು  - ಹರಿದಾಸ ಸಂಘದ ಅಧ್ಯಕ್ಷರು ವಿಪ್ರ ಮುಖಂಡರಾದ ಶ್ರೀ ಕೃಷ್ಣನ್,  ಶ್ರೀ ಗುರುರಾಜ್ ರಾವ್  ,ಶ್ರೀಮತಿ ಇಂದಿರಮ್ಮ , ಶ್ರೀಮತಿ ಗಾಯತ್ರಿ ,ಶ್ರೀಮತಿ  ನಾಗಲಕ್ಷ್ಮಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ  ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ರೀ  ನಾಗೇಶ್ ಭಾಗವಹಿಸಿದ್ದರು . 

ಈ ಸಂಧರ್ಭದಲ್ಲಿ ಕೆ ಆರ್ ಪುರಂ ವಿಭಾಗದಿಂದ ಕನಿಷ್ಠ ೫೦೦ ಜನ ವಿಪ್ರ ಮಹಿಳೆಯರು ಭಾಗವಹಿಸಲು ಉತ್ಸಕರಾಗಿದ್ದರೆಂದು ಮಹಾಸಭಾದ ಸಂಘಟನಾ ಕಾರ್ಯದರ್ಶಿಗಳಾದ ಮುರಳೀಧರ್ ಅವರು ತಿಳಿಸಿದಿರು 

ಕಾರ್ಯಕ್ರಮವನ್ನು ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ  ಮುರಳೀಧರ್ ಅವರು ಆಯೋಜಿಸಿದ್ದರು .