NEWS DETAILS

Image Description

ಬೆಂಗಳೂರು ನಗರ ಕ್ಷೇತ್ರ ಸಂಘಟಕರ ಪ್ರಪ್ರಥಮ ಸಮಾಲೋಚನೆ ಸಭೆ

"ಬೆಂಗಳೂರು ನಗರ ಕ್ಷೇತ್ರ ಸಂಘಟಕರ ಪ್ರಪ್ರಥಮ ಸಮಾಲೋಚನೆ ಸಭೆ" ದಿನಾಂಕ‌ : 06.10.2023 ರಂದು ಬೆಂಗ ಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ  ಕೇಂದ್ರ ಕಛೇರಿಯಲ್ಲಿ  ನಡೆಯಿತು  ಅಧ್ಯಕ್ಷರಾದ ಶ್ರೀ‌ ಅಶೋಕ ಹಾರನ ಹಳ್ಳಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಬೆಂಗಳೂರಿನಾದ್ಯಂತ ಸಂಘಟನೆಯನ್ನು ಬಲ  ಪಡಿಸಿ ಮುಂದಿನ ದಿನಗಳಲ್ಲಿ ಮಹಾಸಭೆ  ವಿಪ್ರ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬೇರು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯತೆಯ ಬಗ್ಗೆ ಮಾತನಾಡಿದರು,  ಸಂಘಟಕರು ಅತ್ಯಂತ ಉತ್ಸಾಹದಿಂದ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಬೆಂಗಳೂರು ನಗರದ  ಉಸ್ತುವಾರಿಗಳಾದ ಉಪಾಧ್ಯಕ್ಷರಾದ  ವೈ.ಎ.ಸುಧಾಕರ್ ಬಾಬು , ಸಂಘಟನಾ ಕಾರ್ಯದರ್ಶಿ ಗಳಾದ ಕಾರ್ತಿಕ್ ಬಾಪಟ್, ಜಯಸಿಂಹ ಶತ್ರುಘ್ನ, ಜಂಟಿ ಕಾರ್ಯದರ್ಶಿಗಳಾದ ಶಂಕರ್ ಪ್ರಸಾದ್ , ಕುಮಾರ್ ಹಾಗೂ ಉಪಾಧ್ಯಕ್ಷರಾದ ಹಿರಣ್ಣಯ್ಯ ಸ್ವಾಮಿ, ಶಿವಶಂಕರ್, ಮುರಳೀಧರ್ ಹಾಗೂ ಇನ್ನೂ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.