NEWS DETAILS

Image Description

ಯಶಸ್ವಿಯಾಗಿ ನಡೆದ ರಾಜ್ಯ ಮಟ್ಟದ ಮಹಿಳಾ ವಿಭಾಗದ ಸಮಿತಿಯ ಪದಗ್ರಹಣ ಕಾರ್ಯಕ್ರಮ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ರಾಜ್ಯ ಸಮಿತಿಯ ಪದಗ್ರಹಣ ಕಾರ್ಯಕ್ರಮವು
ಅಕ್ಟೋಬರ್ 29ರ ಶನಿವಾರದಂದು ಗಾಯತ್ರಿ ಭವನದಲ್ಲಿ ರಾಜ್ಯಾದ್ಯಂತ ಆಗಮಿಸಿದ್ದ ಮಹಿಳಾ ಸದಸ್ಯರಿಂದ   ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು,
ರಾಜ್ಯ ಮಹಿಳಾ ವಿಭಾಗಸ ರಾಜ್ಯ ಸಂಚಾಲಕಿಯಾದ ಡಾಕ್ಟರ್ ಶುಭ ಮಂಗಳ ಸುನಿಲ್ ರವರು ಪ್ರಾಸ್ತಾವಿಕ ಭಾಷಣದ ಮೂಲಕ ಮುಂದಿನ ಕಾರ್ಯಕ್ರಮ ಗಳ ಬಗ್ಗೆ ವಿವರವಾಗಿ ತಿಳಿಸಿದರು, 
ಮುಖ್ಯ ಅತಿಥಿಗಳಾಗಿ ಸುಪ್ರಸಿದ್ಧ ಚಲನಚಿತ್ರ ನಟಿಯಾದ ಶ್ರೀಮತಿ ಸುಮನ್ ನಗರ್ಕರ್ ಅವರು ಮಾತನಾಡಿ ಮಹಿಳೆಯರು ಸಂಘಟಿತರಾದರೆ ಉನ್ನತವಾದ ಸಾಧನೆ ಮಾಡಬಹುದು, ಮಹಿಳೆಯರು ಸ್ವಾವಲಂಬಿ ಆಗಲು ಇಂತಹ ಸಂಘಟನೆ ಅವಶ್ಯ ಎಂದರು, 
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀಯುತ ಅಶೋಕ ಹಾರನಹಳ್ಳಿ ಅವರು ಮಾತನಾಡಿ ಮಹಿಳಾ ವಿಭಾಗವು ರಾಜ್ಯಾದ್ಯಂತ ಬಲಿಷ್ಠ ವಾದ ಸಂಘಟನೆ ಮಾಡಬೇಕಿದೆ, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮನೆಯಲ್ಲಿ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸಿಗುವಂತೆ ಮಾಡದರೆ ಬಹಳ ಉಪಯೋಗ ಆಗುತ್ತದೆ, ಮುಂದಿನ ವರ್ಷದ ಪ್ರಾರಂಭದಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶ ಮಾಡಲು  ಜಿಲ್ಲಾ,  ತಾಲ್ಲೂಕಿನ ಘಟಕಗಳನ್ನು ರಚಿಸಿ ಸಂಘಟಿಸುವಂತೆ ತಿಳಿಸಿದರು, ಕಾರ್ಯಕ್ರಮ ದಲ್ಲಿ ಶ್ರೀಮತಿ ಉಷಾ ಅಶೋಕ ಹಾರನಹಳ್ಳಿ , ಶ್ರೀ ಮತಿ ಮಂಜುಳ ರವಿ ಸುಬ್ರಮಣ್ಯ ಹಾಗೂ ಶ್ರೀಮತಿ ನಂದಿನಿ ವಿಜಯ ವಿಠ್ಠಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,  ಅಧ್ಯಕ್ಷರು ಹಾಗೂ ಮುಖ್ಯ ಅತಿಥಿಗಳು ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಿದರು ಶ್ರೀಮತಿ ಉಷಾ   ಅಶೋಕ ಹಾರ್ನಳ್ಳಿ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು, ಕಾರ್ಯಕ್ರಮ ದಲ್ಲಿ ರಾಜ್ಯದಿಂದ ಆಗಮಿಸಿದ್ದ ಮಹಿಳಾ ಸದಸ್ಯರು, ಅಖಿಲ ಕರ್ನಾಟಕದ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಇತರೆ ಪ್ರಮುಖರು ಭಾಗವಹಿಸಿದ್ದರು, ಕಾರ್ಯಕ್ರಮ ವು ಬಹಳ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ನಡೆಯಿತು