NEWS DETAILS

Image Description

ಬೀದರ್ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ

ಬೀದರ್ ನಿಂದ ಚಾಮರಾಜ ನಗರದವರೆಗೆ ಸಂಘಟನೆಯಾಗಬೇಕು ಎಂಬ ಮಾತನ್ನು ಕಾರ್ಯಗತ ಗೊಳಿಸಲು ಬಂದಿದ್ದೇನೆ - ಬೀದರ್ ಜಿಲ್ಲಾ ಸಂಘಟನಾ ಸಭೆಯಲ್ಲಿ ಬಿ.ಎಸ್. ರಾಘವೇಂದ್ರ ಭಟ್
ಶೀಘ್ರದಲ್ಲೇ ಬೀದರ್ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಜಿಲ್ಲಾ ಬ್ರಾಹ್ಮಣ ಸಮ್ಮೇಳನವನ್ನು ನಡೆಸುತ್ತೇವೆ - ವೆಂಕಟೇಶ್ ಮೋರ್ಕಂಡಿಕರ್

ದಿನಾಂಕ 13.10.2022 ಗುರುವಾರ ಸಂಜೆ ಬೀದರ್ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆಯು ನೆರವೇರಿತು.

ಸನ್ಮಾನ್ಯ ಅಶೋಕ ಹಾರನಹಳ್ಳಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ತಿಳಿಸುವುದರೊಂದಿಗೆ ಬೀದರ್ ಜಿಲ್ಲೆ ಮತ್ತು ಎಲ್ಲ ತಾಲ್ಲೂಕುಗಳಲ್ಲಿ ಸಂಘಟನೆಯನ್ನು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಬ್ರಾಹ್ಮಣ ಮುಖಂಡರೊಂದಿಗೆ ಉಪಾಧ್ಯಕ್ಷ ಪ್ರಮೋದ ಮುನೋಳಿ ಮತ್ತು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ಟರು ಚರ್ಚೆ ನಡೆಸಿದರು. 

ಶೀಘ್ರದಲ್ಲೇ ಬೀದರ್ ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಜಿಲ್ಲಾ ಸಮ್ಮೇಳನವನ್ನು ನಡೆಸಲು ಎಲ್ಲ ತಯಾರಿಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ಕೇಂದ್ರದಿಂದ ನಮಗೆ ಬೆಂಬಲ ಮತ್ತು ಸಹಕಾರವನ್ನು ನೀಡಬೇಕೆಂದು ಜಿಲ್ಲಾ ಪ್ರಮುಖರಾದ ವೆಂಕಟೇಶ ಮೋರ್ಕಂಡಿಕರ್ ಕೋರಿದರು.

ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯ ಉಮೇಶ್ ಶಾಸ್ತ್ರಿ, ಜಿಲ್ಲಾ ಮುಖಂಡ ಶ್ರೀ ಭೀಮಸೇನರಾವ್ ಕಾನಿಹಾಳ್, ಮಹಿಳಾ ಮತ್ತು ಯುವ ವೇದಿಕೆಯ ಸದಸ್ಯರು  ಹಾಗೂ ಬೀದರ್ ಜಿಲ್ಲಾ ಬ್ರಾಹ್ಮಣ ಮುಖಂಡರು ಈ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.

ಸಭೆಯ ಕೊನೆಯಲ್ಲಿ ಮಹಾಸಭಾದ ಸದಸ್ಯತ್ವ ಆಂದೋಲನಕ್ಕೆ ಈ ಭಾಗದಲ್ಲಿ ಹೆಚ್ಚಿನ ಒತ್ತನ್ನು ನೀಡಲು ಕೋರಲಾಯಿತು