NEWS DETAILS

Image Description

ಕಲಬುರ್ಗಿ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ಗೋಮುಖಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ

ಬ್ರಾಹ್ಮಣತ್ವದ ಅರಿವನ್ನು ಕಲಬುರ್ಗಿಯ ಪ್ರತಿ ತಾಲ್ಲೂಕಿಗೂ ಮುಟ್ಟಿಸಬೇಕು - ಕಲಬುರ್ಗಿ ಜಿಲ್ಲಾ ಸಂಘಟನಾ ಸಭೆಯಲ್ಲಿ ಬಿ.ಎಸ್. ರಾಘವೇಂದ್ರ ಭಟ್

ದಿನಾಂಕ 12.10.2022 ಬುಧವಾರ ಸಂಜೆ ಕಲಬುರ್ಗಿ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ಗೋಮುಖಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆಯು ನೆರವೇರಿತು.

ಸನ್ಮಾನ್ಯ ಅಶೋಕ ಹಾರನಹಳ್ಳಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ತಿಳಿಸುವುದರೊಂದಿಗೆ ಕಲ್ಬುರ್ಗಿ ಜಿಲ್ಲೆ ಮತ್ತು ಎಲ್ಲ ತಾಲ್ಲೂಕುಗಳಲ್ಲಿ ಸಂಘಟನೆಯನ್ನು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಬ್ರಾಹ್ಮಣ ಮುಖಂಡರೊಂದಿಗೆ ಉಪಾಧ್ಯಕ್ಷ ಪ್ರಮೋದ ಮುನೋಳಿ ಮತ್ತು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ಟರು ಚರ್ಚೆ ನಡೆಸಿದರು. 

ಕಲಬುರ್ಗಿಯ ಪ್ರಭಾವಿ ಮತ್ತು ಯುವ ಬಿಜೆಪಿ ಮುಖಂಡ, ಮಹಾಸಭಾದ ಜಂಟಿ ಕಾರ್ಯದರ್ಶಿ ರಾಘವೇಂದ್ರ ಕುಲಕರ್ಣಿರೊಂದಿಗೆ, ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಉಮೇಶ್ ಶಾಸ್ತ್ರಿ, ಪ್ರಶಾಂತ ಕೊರಳ್ಳಿ, ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಶ್ರೀಮತಿ ಭಾರ್ಗವಿ ಕುಲಕರ್ಣಿ ಹಾಗೂ ಕಲಬುರ್ಗಿ ಜಿಲ್ಲೆಯ ಬ್ರಾಹ್ಮಣ ಮುಖಂಡರು ಈ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.

ಸಭೆಯ ಕೊನೆಯಲ್ಲಿ ಮಹಾಸಭಾದ ಸದಸ್ಯತ್ವ ಆಂದೋಲನಕ್ಕೆ ಈ ಭಾಗದಲ್ಲಿ ಹೆಚ್ಚಿನ ಒತ್ತನ್ನು ನೀಡಲು ಕೋರಲಾಯಿತು