NEWS DETAILS

Image Description

ವಿಜಾಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಪ್ರಬಲವಾಗಲು ಜಿಲ್ಲಾ ಮಟ್ಟದಲ್ಲಿ ಸಂಘಟನೆ ಬಲಗೊಳ್ಳಬೇಕು - ವಿಜಾಪುರ ಜಿಲ್ಲಾ ಸಂಘಟನಾ ಸಭೆಯಲ್ಲಿ ಬಿ.ಎಸ್. ರಾಘವೇಂದ್ರ ಭಟ್

ದಿನಾಂಕ 11.10.2022 ಮಂಗಳವಾರ ಬೆಳಿಗ್ಗೆ ವಿಜಾಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆಯು ನೆರವೇರಿತು.

ಸನ್ಮಾನ್ಯ ಅಶೋಕ ಹಾರನಹಳ್ಳಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ತಿಳಿಸುವುದರೊಂದಿಗೆ ವಿಜಾಪುರ ಜಿಲ್ಲೆ ಮತ್ತು ಎಲ್ಲ ತಾಲ್ಲೂಕುಗಳಲ್ಲಿ ಸಂಘಟನೆಯನ್ನು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಬ್ರಾಹ್ಮಣ ಮುಖಂಡರೊಂದಿಗೆ ಉಪಾಧ್ಯಕ್ಷ ಪ್ರಮೋದ ಮುನೋಳಿ ಮತ್ತು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಭಟ್ಟರು ಚರ್ಚೆ ನಡೆಸಿದರು. 

ಬಿಜಾಪುರ ಡೆವಲಪ್ ಮೆಂಟ್ ಅಥಾರಿಟಿಯ ಅಧ್ಯಕ್ಷರು, ಮಹಾಸಭಾ ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯರಾದ ಹರಿ ಅರವಿಂದರಾವ್ ಗೊಳಸಂಗಿರೊಂದಿಗೆ, ಮಹೇಶ ದೇಶಪಾಂಡೆ, ಉಮೇಶ್ ಶಾಸ್ತ್ರಿ, ಯುವ ವಿಭಾಗದ ಆದಿತ್ಯ ಕುಲಕರ್ಣಿ, ಶ್ರೀಮತಿ ಮೀತಾ ದೇಸಾಯಿ, ವಿಜಾಪುರ ಜಿಲ್ಲೆಯ ಬ್ರಾಹ್ಮಣ ಮುಖಂಡರು ಈ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು.

ಸಭೆಯ ಕೊನೆಯಲ್ಲಿ ಮಹಾಸಭಾದ ಸದಸ್ಯತ್ವ ಆಂದೋಲನಕ್ಕೆ ಈ ಭಾಗದಲ್ಲಿ ಹೆಚ್ಚಿನ ಒತ್ತನ್ನು ನೀಡಲು ಕೋರಲಾಯಿತು