NEWS DETAILS

Image Description

ಶ್ರೀ ಅಶೋಕ ಹಾರನಹಳ್ಳಿರವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇರುವ ಎ.ಕೆ.ಎಸ್ ವಿದ್ಯಾಮಾನ್ಯ ಲೋಕಮಾನ್ಯ ಫೌಂಡೇಶನ್ ಗೆ ಭೇಟಿ ನೀಡಿದರು

ದಿನಾಂಕ 06 /02 /2022 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ  ಶ್ರೀ ಅಶೋಕ ಹಾರನಹಳ್ಳಿರವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಇರುವ ಎ.ಕೆ.ಎಸ್ ವಿದ್ಯಾಮಾನ್ಯ ಲೋಕಮಾನ್ಯ ಫೌಂಡೇಶನ್ ಗೆ  ಭೇಟಿ ನೀಡಿದರು.ಎ.ಕೆ.ಎಸ್.ವಿದ್ಯಾಮಾನ್ಯ ವಿದ್ಯಾಪೀಠ ಮಹಾಸಭಾದ ಕಾರ್ಯಕಾರಿಣಿ ಸದಸ್ಯರಾದ ಡಾ.ಪಿ.ಎಸ್.ಅಂಜನ್ ಕುಮಾರ್ ಶರ್ಮಾ  ರವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಗುರುಕುಲದ ಆಡಳಿತ ಮಂಡಳಿ ವತಿಯಿಂದ  ಮಹಾಸಭಾದ ಅಧ್ಯಕ್ಷರಾದ  ಶ್ರೀ ಅಶೋಕ ಹಾರನಹಳ್ಳಿ ರವರನ್ನು ಸನ್ಮಾನಿಸಲಾಯಿತು .ಈ ಸಂಧರ್ಭದಲ್ಲಿ ಅಧ್ಯಕ್ಷರು  ಗುರುಕುಲದ  ವಿದ್ಯಾರ್ಥಿಗಳು ವೇದಾಧ್ಯಯನದ ಬಗ್ಗೆ ತೋರಿಸುತ್ತಿರುವ ಒಲವನ್ನು ಕಂಡು ಪ್ರೋತ್ಸಾಹದ ಮಾತುಗಳನ್ನಾಡಿದರು. 

ವಂದನೆಗಳೊಂದಿಗೆ 
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).